ನವನೀತಗೀತ - ಅಯೋಧ್ಯಾ ಪಬ್ಲಿಕೇಶನ್ಸ್ ನ ವಿಶಿಷ್ಟ ಕೃತಿ. ಉಡುಪಿಯ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಭಗವದ್ಗೀತೆಯ ಪ್ರತಿ ಅಧ್ಯಾಯದ ಸಾರಸಂಗ್ರಹವನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾಗಿ ಮತ್ತು ಸಂಗ್ರಹವಾಗಿ ಬರೆದಿದ್ದಾರೆ. ಹದಿನೆಂಟು ಅಧ್ಯಾಯಗಳ ಸಾರಸಂಗ್ರಹ ಈ ಕೃತಿಯಲ್ಲಿ ಹದಿನೆಂಟು ಅಧ್ಯಾಯಗಳಾಗಿ ಬಂದಿದೆ. ಭಗವದ್ಗೀತೆಯ ಸಂದೇಶ ಏನು, ಅದರಲ್ಲಿ ಶ್ರೀಕೃಷ್ಣ ಹೇಳಿರುವ ಉಪದೇಶದ ಅರ್ಥ ಏನು ಎಂಬ ಕುತೂಹಲವಿರುವ ಜಿಜ್ಞಾಸುಗಳಿಗೆ ಈ ಕೃತಿ ಒಂದೊಳ್ಳೆಯ ಪ್ರವೇಶಿಕೆಯಾಗಿ, ಪ್ರೈಮರ್ ಆಗಿ ನೆರವಾಗಬಲ್ಲುದು.