New Patriotic Books Combo
₹310.00 ₹275.00
1) Kargil Tigers: Captivating stories of fearless war heroes
writer: Rohith Chakrathirtha
Step into the heart-pounding saga of Kargil Tigers, a gripping book that unveils the heroic tales of India’s bravehearts who stood tall during the 1999 Kargil War. This captivating narrative encapsulates the courage, unwavering determination, and selfless devotion of our soldiers as they faced adversity head-on. Meet the valiant fighters like Capt Vikram Bhatra, Rifleman Sanjay Kumar, Grenadier Yogendra Singh Yadav, and more, who etched their names in history with their remarkable feats. Immerse in this riveting account, meant to inspire and educate the young generation about the unparalleled spirit of our defenders.
2)ದಾರಿ ತಪ್ಪಿದ ದೇಶ ಪಾಕಿಸ್ತಾನ
ಲೇಖಕರು: ಮೋಹನ್ ವಿಶ್ವ
ದಾರಿ ತಪ್ಪಿದ ದೇಶ ಪಾಕಿಸ್ತಾನ ಕೃತಿಯು, ಕಳೆದ 75 ವರ್ಷಗಳಲ್ಲಿ ಪಾಕಿಸ್ತಾನ ಇಟ್ಟ ತಪ್ಪು ಹೆಜ್ಜೆಗಳು, ಮಾಡಿದ ಅತಾರ್ಕಿಕ ನಿರ್ಧಾರಗಳು ಹಾಗೂ ಮಾಡಿಕೊಂಡ ಐತಿಹಾಸಿಕ ಪ್ರಮಾದಗಳು ಹೇಗೆ ಆ ದೇಶವನ್ನಿಂದು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿವೆ ಎಂಬುದನ್ನು ವಿವರವಾಗಿ ತಿಳಿಸಿಕೊಡುತ್ತದೆ. ರಾಜಕೀಯ ವಿಪ್ಲವ, ಅಪವಿತ್ರ ಮೈತ್ರಿ, ಮಿಲಿಟರಿ ಮೇಲುಗೈ, ಅವ್ಯಾಹತ ಭ್ರಷ್ಟಾಚಾರ, ನಿಲ್ಲದ ಭಯೋತ್ಪಾದನೆ ಹಾಗೂ ಭಾರತದ ಬಗ್ಗೆ ಇರುವ ಅಪರಿಮಿತವಾದ ದ್ವೇಷ – ಈ ಎಲ್ಲದರಿಂದ ನಲುಗಿಹೋಗುತ್ತಿರುವ ಪಾಕಿಸ್ತಾನದ ಸದ್ಯದ ಪರಿಸ್ಥಿತಿಯನ್ನು ತಿಳಿಸುತ್ತ, ಅದರ ಭವಿಷ್ಯದ ಬಗ್ಗೆಯೂ ಒಳನೋಟಗಳನ್ನು ಕೊಡುವ ಕೃತಿ ಇದು.
3)ನರಾಧಮರ ನಡುವೆ
ಲೇಖಕರು: Dr. ಮೀನಾಕ್ಷಿ ರಾಮಚಂದ್ರ
ಮಲಯಾಳಂ ಲೇಖಕ ಎಸ್. ಮಹಾದೇವನ್ ತಂಬಿಯವರ ಕಾದಂಬರಿಯನ್ನು ಡಾ. ಮೀನಾಕ್ಷಿ ರಾಮಚಂದ್ರ ಕನ್ನಡಕ್ಕೆ ತಂದಿದ್ದಾರೆ. ಗಾತ್ರದ ದೃಷ್ಟಿಯಿಂದ ಇದು ಸಣ್ಣ ಕೃತಿ. ಆದರೆ ಇದಕ್ಕೊಂದು ಐತಿಹಾಸಿಕ ಮಹತ್ವವಿದೆ. “ಕಾಶ್ಮೀರ್ ಫೈಲ್ಸ್”ನಂಥ ಸಿನೆಮಗಳು ತೆರೆಕಾಣುವುದಕ್ಕೆ ದಶಕದಷ್ಟು ಮೊದಲೇ ಮಲಯಾಳಂನಲ್ಲಿ ಪ್ರಕಟವಾಗಿ ಕನ್ನಡದಲ್ಲಿ ಭಾಷಾಂತರವಾಗಿದ್ದ ಕೃತಿ ಇದು. ಕಾಶ್ಮೀರ ಹೇಗೆ ನಮ್ಮ ಕೈತಪ್ಪುತ್ತಹೋಯಿತು ಎಂಬುದನ್ನು ಕೆಲವೇ ಕೆಲವು ಪುಟಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಲೇಖಕರು ಇಲ್ಲಿ ವಿವರಿಸಿದ್ದಾರೆ. ಹೇಳಬೇಕಾದ್ದೆಲ್ಲವೂ ಇಲ್ಲಿ ಸೂತ್ರರೂಪದಲ್ಲಿ ಬಂದುಹೋಗಿವೆ. ಇಲ್ಲಿ ಮೂರ್ನಾಲ್ಕು ಸಾಲುಗಳಲ್ಲಿ ಬಂದುಹೋಗಿರುವ ಹಿಂಸೆಯ ವಿವರಗಳನ್ನೇ ಬೇಕಿದ್ದರೆ ಒಂದಿಡೀ ಪುಸ್ತಕವಾಗಿ ಬರೆಯಬಹುದು. ಅಷ್ಟು ಸಾಂದ್ರವಾಗಿದೆ ಇಲ್ಲಿನ ಭಾಷೆ, ಕಥೆ.
ಇತ್ತೀಚೆಗೆ ಮಾಜಿ ಕಾಂಗ್ರೆಸ್ಸಿಗ ಗುಲಾಂ ನಬಿ ಆಜಾದ್ “ಕಾಶ್ಮೀರದಲ್ಲಿರುವ ಮುಸಲ್ಮಾನರೆಲ್ಲ ಮೂಲತಃ ಹಿಂದುಗಳೇ” ಎಂಬ ಮಾತು ಹೇಳಿದ್ದಾರೆ. ವೃದ್ಧನಾರೀ ಪತಿವ್ರತಾ ಎಂಬಂತಾಗಿದೆ! ಜೀವನವೆಲ್ಲ ಸುಳ್ಳು ಹೇಳಿ, ಇದೀಗ ಇಳಿವಯಸ್ಸಲ್ಲಿ ನಿಜ ಉಸುರಿದರೆ ಪ್ರಯೋಜನ ಏನು? ಆಜಾದ್ “ಕಾಶ್ಮೀರದಲ್ಲಿದ್ದವರೆಲ್ಲ ಭಾರತೀಯರೇ. ಹೊರಗಿನಿಂದ ಯಾರೂ ಬರಲಿಲ್ಲ” ಎಂಬ ಸುಳ್ಳನ್ನೂ ಆ ಮಾತಿನೊಂದಿಗೆ ಸೇರಿಸಿದ್ದಾರೆ. ಕಾಶ್ಮೀರವನ್ನು ನರಕ ಮಾಡಲು ಪಾಕಿಸ್ತಾನ, ಅಫಘಾನಿಸ್ತಾನಗಳಿಂದ ಸಾವಿರ-ಲಕ್ಷ ಸಂಖ್ಯೆಯಲ್ಲಿ ಹೊರಗಿನವರು ಬಂದು ತುಂಬಿಕೊಂಡರು; ಕಾಶ್ಮೀರಿ ಪಂಡಿತರನ್ನು ಈ ಪರಕೀಯರು ಇನ್ನಿಲ್ಲದಂತೆ ಕಾಡಿ ಒಕ್ಕಲೆಬ್ಬಿಸಿದರು; ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರವಾಗಲೀ ಕಾಶ್ಮೀರದಲ್ಲಿದ್ದ ಸ್ಥಳೀಯ ಸರಕಾರವಾಗಲೀ ಪಂಡಿತಜನಾಂಗದ ಪರವಾಗಿ ಒಂದಕ್ಷರದ ಬೆಂಬಲವನ್ನೂ ಸೂಚಿಸಲಿಲ್ಲ ಎಂಬುದು ಇತಿಹಾಸದ ಸತ್ಯ. ಕಾಶ್ಮೀರದ ಮಣ್ಣಿನಲ್ಲಿ ಲಕ್ಷಾಂತರ ಹಿಂದುಗಳ ಮಾರಣಹೋಮದ ನೋವಿನ ಕತೆಗಳಿವೆ. ಹಿಂದುಗಳ ಹೆಣಗಳ ಮೇಲೆ ಮಹಲುಗಳನ್ನು ಕಟ್ಟಿಕೊಂಡ ಇಲ್ಲಿನ ಮತಾಂಧರಿಗೆ ಪಶ್ಚಾತ್ತಾಪದ ಲವಲೇಶವೂ ಇಲ್ಲವೆಂಬುದು ರಾಷ್ಟ್ರೀಯ ದುರಂತಗಳಲ್ಲೊಂದು.
Additional information
Weight | 230 g |
---|---|
Date of Release | |
Hard/PaperBack | |
Publication | |
Size |
Related products
-
Ajji Helida Kategalu
Rohith Chakrathi...
- Rated 5.00 out of 5
- ₹120.00
- Add to cart
-
Vihith Vidhya
Narayana Shevire
- Rated 0 out of 5
- ₹300.00
- Add to cart
-
- Sale!
The New World Order
Prashanth Vaidya...
- Rated 5.00 out of 5
-
₹325.00₹299.00 - Add to cart
-
Frankenstein
Rohith Chakrathi...
- Rated 0 out of 5
- ₹80.00
- Add to cart
-
- Sale!
Enchanting stories from India and Abroad
R.K Madhukar
- Rated 2.00 out of 5
-
₹325.00₹299.00 - Add to cart
-
106 Yahudi Kathegalu
Rohith Chakrathi...
- Rated 5.00 out of 5
- ₹130.00
- Add to cart
Reviews
There are no reviews yet.